ಯುವಕನ ಬರ್ಬರ ಹತ್ಯೆ: ಮೃತದೇಹ ಚರಂಡಿಗೆ ಎಸೆದು ಪರಾರಿ | ಜನತಾ ನ್ಯೂಸ್
ಶಿವಮೊಗ್ಗ : ಯುವಕನೋರ್ವನನ್ನು ಬರ್ಬರವಾಗಿ ಕೂಲೆ ಮಾಡಿ ಮೃತದೇಹವನ್ನು ಚರಂಡಿಗೆ ಬಿಸಾಡಿರುವ ಘಟನೆ ಇಲ್ಲಿನ ಟಿಪ್ಪು ನಗರದಲ್ಲಿ ನಡೆದಿದೆ.
ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ತುಂಗಾನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನಗರದ ಲತೀಫ್, ರಾಝಿಕ್ ಸೇರಿ ನಾಲ್ವರು ಬಂಧಿತರು. ಮಾರ್ನಮಿಬೈಲ್ನ ಇರ್ಫಾನ್ ಅಲಿಯಾಸ್ ಟ್ವಿಸ್ಟ್ (28) ಕೊಲೆಯಾಗಿದ್ದ ಯುವಕ.
ಟಿಪ್ಪುನಗರದಲ್ಲಿ ಶನಿವಾರ ರಾತ್ರಿ ಗಾಂಜಾ ಪ್ರಕರಣವೊಂದರಲ್ಲಿ ಯುವಕರ ಗುಂಪೊಂದು ಇರ್ಫಾನ್ನನ್ನು ಚಾಕುವಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.
ಲತೀಫ್ಗೆ ಎಚ್ಚರಿಕೆ ನೀಡಲು ಇರ್ಫಾನ್ ಚಾಕು ಕೊಂಡೊಯ್ದಿದ್ದ. ಗಲಾಟೆಯಲ್ಲಿ ಇರ್ಫಾನ್ ಚಾಕುವಿನಿಂದ ಲತೀಫ್ ಮತ್ತವರ ತಂಡದವರಿಗೆ ಇರಿಯಲು ಯತ್ನಿಸಿದ್ದ. ಈ ವೇಳೆ ಚಾಕುವನ್ನು ಕಸಿದುಕೊಂಡ ಎದುರಾಳಿಗಳು ಇರ್ಫಾನ್ನ ಎದೆ, ಹೊಟ್ಟೆ ಭಾಗಕ್ಕೆ ಇರಿದಿದ್ದರು. ಯುವಕರ ಗುಂಪು ಇರ್ಫಾನ್ಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ಚರಂಡಿಗೆ ಎಸೆದು ಪರಾರಿಯಾಗಿದ್ದರು. ಘಟನೆಯಲ್ಲಿ ತೀವ್ರ ರಕ್ತಸಾವ್ರದಿಂದ ಇರ್ಫಾನ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.